ಶನಿವಾರ, ಆಗಸ್ಟ್ 30, 2014

ಸುಖಸಂಸಾರಕ್ಕೊಂದೇ ಸೂತ್ರ



ರಾಮಮಾವ ಸೀತತ್ತೆ...ಇಡೀ ಊರಿಗೆ ಹಿರಿತಲೆಗಳು..... ಮೊನ್ನೆಮೊನ್ನೆ ಮದುವೆಯ ಅರವತ್ತನೇವರ್ಷದ ಆನಿವರ್ಸರಿ ಮುಗ್ಸಿ, ಸಹಸ್ರ ಚಂದ್ರದರ್ಶನದ ಹವನ,ಹೋಮ ಕಾರ್ಯಕ್ರಮ ಮುಗ್ಸ್ಕ್ಯಂಡವು...ಹೆಸರಿನಂತೆ ಒಂಥರಾ ಆದರ್ಶ ದಾಂಪತ್ಯ.. ಇಡೀ ಊರಿಗೆ ಗಂಡ-ಹೆಂಡತಿ ಅಂದರೆ ರಾಮಮಾವ, ಸೀತತ್ತೆ ಹಾಂಗಿರವು ಹೇಳ ಮಾತೂ ಇದ್ದು...ಇದ್ದಿದ್ದೂ ಹಾಂಗೆಯ... ಅವರ ಮಧ್ಯೆ ಎಂತದೂ ಗುಟ್ಟೆ ಇತ್ತಿಲ್ಲೆ... ಸೀತತ್ತೆಯ ಅಪ್ಪನ ಮನೆಲಿ ಕೊಟ್ಟ ಶಣ್ಣ ಮರದ ಪಿಟಾರಿ ಒಂದು ಬಿಟ್ಟು... ಅದರ ಚಾವಿ ಎಷ್ಟು ಸಲ ಕೇಳಿದ್ರೂ ಅದು ಕೊಟ್ಟಿದ್ದೆ ಅಲ್ಲ...

ಹೀಂಗಿಪ್ಪಕರೆ,,, ಸೀತತ್ತೆಗೆ ಇದ್ದಕ್ಕಿದ್ದಂತೆ ಜೋರು ಜ್ವರ... ಸುಸ್ತು.. ನೋಡಲೇ ಆಗಗಿದ್ದದಷ್ಟು ಸೋತೋತು,,,ಪಾಪ, ಡಾಕ್ಟರು ಕೂಡ ಇನ್ನು ಸೀತತ್ತೆ ಆಸೆ ಬಿಡದೇ ಒಳ್ಳೇದು ಹೇಳಿ ಸೂಕ್ಷ್ಮವಾಗಿ ಹೇಳಿದ್ರು... ಆಗ, ಮಧ್ಯಾನಮೆಲೆ ಚಾ ಕುಡ್ದಾದಮೇಲೆ, ರಾಮಮಾವ ಕೇಳದ.."ಕೇಳ್ಚನೆ,,ಸೀತೆ... ಇಷ್ಟು ವರ್ಷ ಸಂಸಾರ ಮಾಡ್ಕ್ಯ ಬಂದಾತು...ಆದ್ರೆ ಎನಗೆ ನೀನು ನಿನ್ನ ಪಿಟಾರಿ ಚಾವಿ ತೆಗ್ಯಲೆ ಮಾತ್ರ ಕೊಟ್ಟಿದ್ದೇ ಇಲ್ಲೆ.....ಎನ್ನ ಹತ್ರ ಇನ್ನೂ ಎಂತ ಗುಟ್ಟೇ ಮಾರಾಯ್ತಿ..?" ಸೀತತ್ತೆ ತಗಬನ್ನಿ ಪಿಟಾರಿನ..., ಹೇಳಿ ತನ್ನ ಕರಿಮಣಿಸರದಲ್ಲೆ ಇಟ್ಕಂಡಿದ್ದ ಚಾವಿ ಕೊಟ್ತು....ಬೀಗ ತೆಗಿರಿ ,, " ಅಂತು..
ಪಿಟಾರಿ ಬೀಗ ತೆಗೆದ ರಾಮಮಾವಂಗೆ ಎರಡು ಮಪ್ಲರು, ಮತ್ತೆ ಇಪ್ಪತೈದು ಸಾವಿರ ರೂಪಾಯಿ ಶಿಕ್ತು,,, ಇದರನ್ನ ಎಂತಕೆ ಯನ್ನ ಹತ್ರ ಮುಚ್ಚಿಡ್ತಪ??..ಹಾಲು-ಮಜ್ಗೆ-ತುಪ್ಪದ ದುಡ್ಡಾಗಿಕು..ಹೇಳಿ ಅಂದ್ಕೊತ್ತಿಪಕರೆ..ಸೀತತ್ತೆ ಅಂತು...
"
ಕೇಳದ್ರ..ಯನ್ ಮದ್ವೆ ಆಪಕಾರೆ ಯಮ್ಮನೆ ಅಮ್ಮಮ್ಮ ಹೇಳಿತ್ತು..ತಂಗಿ , ಗಂಡನ ಹತ್ತರ ಯಾವಾಗ್ಲೂ ಜಗಳ ಮಾಡಡ, ಮಾತಿಗೆ ಮಾತು ಬೆಳದ್ರೆ, ಚೊಲೊ ಸಂಸಾರ ಹಾಳಾಗಿ ಹೋಗ್ತು,,ಏನಾದ್ರೂ ನಿನಗೆ ಯಜಮಾನನ ಮೇಲೆ ಶಿಟ್ಟು ಬಂತ... ಒಂದು ಮಪ್ಲರ್ ಹೆಣಿ.. " ಹೇಳಿ ಇನ್ನೊಂದ್ಸಲ ಕೆಮ್ಮತು..

ರಾಮಮಾವಂಗೆ ದುಃಖ ತಡ್ಕಂಬ್ಲೇ ಆಜಿಲ್ಲೆ...ಪಿಟಾರಿಲಿ ಇದ್ದಿದ್ದು ಬರೀ ಎರಡು ಮಪ್ಲರ್ರು... ಅಂದರೆ ಈ ಅರವತ್ತು ವರ್ಷದ ಸಂಸಾರದಲ್ಲಿ ಸೀತೆಗೆ ತನ್ನ ಮೇಲೆ ಸಿಟ್ಟು ಬಂದಿದ್ದು ಬರೀ ಎರಡೇ ಸಲ.. ಎಷ್ಟು ಪ್ರೀತಿ ತನ್ನ ಮೇಲೆ ,, ಕಂಠ ಭಾರವಾತು.
"ಸೀತೆ.." ಹೇಳಿ ಕರದ,,ಪ್ರೀತಿಯಿಂದ.. "ಅಂದರೆ ಯನ್ಮೆಲೆ ಇಷ್ಟು ವರ್ಷದಲ್ಲಿ ಸಿಟ್ಟು ಬಂದಿದ್ದು ಎರಡೇ ಸಲವನೆ???.".. ಆದರೆ, ಅಷ್ಟು ದುಡ್ಡು ಎಲ್ಲಿಂದ ಮಾಡದ್ಯೆ??"
ಓಹ್..ಅದಾ??..ಸೀತತ್ತೆ ಅಂತು,,".ಅದು ಮಪ್ಲರ್ ಮಾರಾಟ ಮಾಡಿ ಬಂದ ದುಡ್ಡು..."!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ